ಅಂದರ್ ಬಾಹರ್: ನಾಲ್ವರ ಬಂಧನ
Update: 2020-08-10 16:41 GMT
ಶಂಕರನಾರಾಯಣ, ಆ.10: ಅಂಪಾರು ಗ್ರಾಮದ ಬಲಾಡಿ ಶಾಂತಿಧಾಮ ಟ್ರಸ್ಟ್ ಹಿಂಬದಿ ಆ.9ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ ದ್ದಾರೆ.
ಬಾಲಾಡಿಯ ನಾಗೇಶ(44), ಅಂಪಾರಿನ ಬಾಬಣ್ಣ(55), ಉದಯ, ಅಶೋಕ ಬಂಧಿತ ಆರೋಪಿಗಳು. ಇವರಿಂದ 4,365ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.