ಐಎಸ್‌ಪಿಆರ್‌ಎನ್ ಸಂತ್ರಸ್ಥರಿಗೆ 1.28 ಕೋಟಿ ರೂ.ಪರಿಹಾರ ವಿತರಣೆ

Update: 2020-08-10 16:57 GMT

ಉಡುಪಿ, ಆ.10: ಕಾಪು ತಾಲೂಕಿನ ಪಾದೂರಿನಲ್ಲಿರುವ ಕೇಂದ್ರ ಸರಕಾರ ಸ್ವಾಮ್ಯದ ಐಎಸ್‌ಪಿಆರ್‌ಎಲ್‌ಗೆ ಪೈಪ್‌ಲೈನ್ ಅಳವಡಿಸುವಾಗ ಬಂಡೆ ಸ್ಪೋಟದಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಕೇಂದ್ರ ಸರ್ಕಾರದಿಂದ ನೀಡಿರುವ 1.28 ಕೋಟಿ ರೂ ಗಳ ಹೆಚ್ಚುವರಿ ಪರಿಹಾರವನ್ನು 120 ಮಂದಿ ಸಂತ್ರಸ್ಥರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಸೋಮವಾರ ಕಳತ್ತೂರಿನ ಕುಲಶೇಖರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ , ತಹಶೀಲ್ದಾರ್ ಮೊಹಮದ್ ಇಸಾಕ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News