ಬ್ರಿಟೀಷರ ಗುಲಾಮರಾಗಿದ್ದವರಿಂದ ದೇಶಭಕ್ತಿಯ ಪಾಠ ಅಗತ್ಯವಿಲ್ಲ: ಅಶೋಕ್ ಕೊಡವೂರು

Update: 2020-08-11 16:20 GMT

ಹಿರಿಯಡ್ಕ, ಆ.11: ಅಂದು ಬ್ರಿಟೀಷರ ಗುಲಾಮರಾಗಿದ್ದವರು ಇಂದು ದೇಶಭಕ್ತಿಯ ಗುತ್ತಿಗೆ ಪಡೆದು ದೇಶಭಕ್ತಿಯ ಪ್ರಮಾಣಪತ್ರ ಹಂಚುತ್ತಿದ್ದಾರೆ. ಬ್ರಿಟೀಷರೊಂದಿಗೆ ಹೊಂದಾಣಿಕೆ ಮಾಡಿಕೊಂಡವರಿಂದ ದೇಶಭಕ್ತಿಯ ಪಾಠ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಕಾಪು ಬ್ಲಾಕ್ ಸೇವಾದಳದ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ 78ನೇ ಕ್ವಿಟ್ ಇಂಡಿಯಾ ಚಳುವಳಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತ ನಾಡುತ್ತಿದ್ದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಅಂದು ಬ್ರಿಟೀಷ್ ಸರಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಹಿಂದೂ ಮಹಾಸಭಾದ ಮೂಲಕ ಆರಿಸಿ ಬಂದಿದ್ದ ಪ್ರತಿನಿಧಿಗಳು ಯಾರೊ ಬ್ಬರೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿ ಸಿಲ್ಲ. ಇಂದು ಅವರೇ ದೇಶಪ್ರೇಮದ ಬಗ್ಗೆ ಕಾಂಗ್ರೆಸ್ಸಿಗೆ ಪಾಠ ಹೇಳುತ್ತಿರುವುದು ವಿಪರ್ಯಾಸ ಎಂದರು.

ಹಿರಿಯ ಕಾಂಗ್ರೆಸಿಗ ಜಯಂತ್ ರಾವ್ ಹಿರಿಯಡ್ಕ ಮಾತನಾಡಿ, ಅಂದಿನ ಆಂದೋಲನದಂತೆ ಇಂದು ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಯನ್ನು ತೊಲಗಿಸಿ ಆಂದೋಲನವನ್ನು ಹಮ್ಮಿಕೊಳ್ಳಬೇಕಾಗಿದೆಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ರಾವ್, ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್ ವಿಠಲ್, ಸೇವಾದಳ ಮುಖ್ಯ ಸಂಘಟಕ ಕಿಶೋರ್ ಎರ್ಮಾಳ್, ಶರತ್ ಕುಮಾರ್ ಬೈರಂಪಳ್ಳಿ, ಜಯವಂತ ರಾವ್, ಹಮದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News