ಸಂಸದ ಅನಂತ್ ಕುಮಾರ್ ಹೆಗಡೆ ಭಾರತೀಯನಾಗಲೂ ಯೋಗ್ಯರಲ್ಲ: ಐವನ್ ಟ್ವೀಟ್

Update: 2020-08-11 17:43 GMT

ಮಂಗಳೂರು, ಆ.11: ‘ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಭಾರತೀಯನಾಗಲೂ ಯೋಗ್ಯರಲ್ಲ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಟೀಕಿಸಿದ್ದಾರೆ.

ಬಿಎಸ್ಸೆನ್ನೆಲ್‌ನಲ್ಲಿ ದೇಶದ್ರೋಹಿಗಳೆ ತುಂಬಿದ್ದಾರೆ ಎಂದು ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಅವರಿಗೆ ಟ್ವೀಟರ್‌ನಲ್ಲಿ ಸರಣಿಯಾಗಿ ಐವನ್ ಡಿಸೋಜ ತಿರುಗೇಟು ನೀಡಿದ್ದಾರೆ.

‘ದೇಶದ್ರೋಹಿಗಳನ್ನು ಪತ್ತೆ ಹಚ್ಚುವ ಅನಂತ್ ‌ಕುಮಾರ್ ಹೆಗಡೆಯವರೇ, ನೀವು ಸಂಸದರಾಗಲು ಅಲ್ಲ; ಭಾರತೀಯನಾಗಲೂ ಯೋಗ್ಯರಲ್ಲ. ಬಿಎಸ್ಸೆನ್ನೆಲ್ ಪುನಶ್ಚೇತನಕ್ಕೆ ಕೇಂದ್ರ ಸರಕಾರವು ಯಾವುದೇ ಕ್ರಮಕೈಗೊಳ್ಳದೇ ಇದೀಗ ಬಡಪಾಯಿ ನೌಕರರಿಗೆ ದೇಶದ್ರೋಹಿ ಪಟ್ಟ ಕಟ್ಟುತಿದ್ದೀರಿ. ಬಿಜೆಪಿಯವರಿಗೆ ನಾಚಿಕೆಯಾಗಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಐವನ್ ಅವರು ಮತ್ತೊಂದು ಟ್ವೀಟ್‌ನಲ್ಲಿ ಟೀಕಾಪ್ರಹಾರ ಮುಂದುವರಿಸಿದ್ದು, ‘ಬಿಜೆಪಿಯವರ ಪ್ರಕಾರ ದೇಶದ್ರೋಹಿಗಳ ಪಟ್ಟಿಗೆ ಬಿಎಸ್ಸೆನ್ನೆಲ್ ನೌಕರರು ಹೊಸ ಸೇರ್ಪಡೆ. ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರೂ ದೇಶದ್ರೋಹಿಗಳೆಂದು ಸಂಸದ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರಕಾರವು ಮಾಡಿದ ತಪ್ಪಿಗೆ ಲಕ್ಷಾಂತರ ಬಿಎಸ್ಸೆನ್ನೆಲ್ ನೌಕರರು ದೇಶದ್ರೋಹಿಗಳಾಗಬೇಕೇ’ ಎಂದು ಟ್ವೀಟ್‌ನಲ್ಲಿ ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News