ಆ.13: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-08-11 17:46 GMT

ಮಂಗಳೂರು, ಆ.11: ನಗರದ ನೆಹರೈ ಮೈದಾನ ಹಾಗೂ ನಂದಿಕೂರು ವಿದ್ಯುತ್ ಉಪಕೇಂದ್ರಗಳ ಮೂಲಕ ಹೊರಡುವ ಫೀಡರ್‌ಗಳಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದು, ಆ.13ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.

ಆ.13ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆ.ವಿ. ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆ.ವಿ, ಬಿ.ಇ.ಎಂ ಹಾಗೂ 11 ಕೆ.ವಿ ಮಾರ್ಕೆಟ್ ಫೀಡರ್‌ಗಳಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಬಂದರ್, ಬಂದರ್ ಪೊಲೀಸ್ ಠಾಣೆ, ಬಾಂಬೆ ಲಕ್ಕಿ ಹೊಟೇಲ್, ಅಝೀಝುದ್ದೀನ್ ರಸ್ತೆ, ಭಟ್ಕಳ ಬಝಾರ್, ಅನ್ಸಾರಿ ರಸ್ತೆ, ಕಂಡತ್‌ಪಳ್ಳಿ, ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತ ದುರ್ಗಾ, ಜಿ.ಎಚ್.ಎಸ್.ರಸ್ತೆ, ಪಿ.ಎಂ. ರಾವ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಮುಲ್ಕಿ: ಆ.13ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 110 ಕೆ.ವಿ. ನಂದಿಕೂರು ವಿದ್ಯುತ್ ಉಪಕೇಂದ್ರದಲ್ಲಿ ನಿಯಯತಕಾಲಿಕ ನಿರ್ವಹಣೆ ಹಮ್ಮಿಕೊಂಡಿದೆ. ಇದರಿಂದ ಮುಲ್ಕಿ, ಚಿತ್ರಾಪು, ಕಾರ್ನಾಡು ಕೈಗಾರಿಕಾ ಪ್ರದೇಶ, ಕೆ.ಎಸ್.ರಾವ್ ನಗರ, ಕಿನ್ನಿಗೋಳಿ, ಪಕ್ಷಿಕೆರೆ, ಗೋಳಿಜೋರ, ಗುತ್ತಕಾಡು, ಎಸ್ಕೋಡಿ, ಬಪ್ಪನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News