ಆ.12: ಕುದ್ರೋಳಿಯಲ್ಲಿ ಆಯುಷ್ಮಾನ್ ಕಾರ್ಡ್ ಶಿಬಿರ

Update: 2020-08-11 17:52 GMT

ಮಂಗಳೂರು, ಆ.11: ಮುಸ್ಲಿಮ್ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ವೆಲ್‌ನೆಸ್ ಆಯುಷ್ಮಾನ್ ಕ್ಯಾಂಪ್ ಇದರ ವತಿಯಿಂದ ಕುದ್ರೋಳಿ ವಾರ್ಡಿನ ಜನರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ಮಾಡಿಕೊಡಲು ಶಿಬಿರ ಆಯೋಜಿಸಲಾಗಿದೆ.

ಆಸಕ್ತರು ಆ.12ರಂದು ಬೆಳಗ್ಗೆ 9:30ರಿಂದ ಸಂಜೆ 5ರ ತನಕ ಕುದ್ರೋಳಿಯ ಜಮಿಯತುಲ್ ಸ-ಅದ ಅಸ್ಸೋಸಿಯೇಶನ್ ಕಚೇರಿಗೆ ಭೇಟಿ ನೀಡಿ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಆಯುಷ್ಮಾನ್ ಕಾರ್ಡ್ ಮಾಡಿಸಲು ಪಡಿತರ ಚೀಟಿ, ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ತರಬೇಕು ಎಂದು ಮುಸ್ಲಿಂ ಐಕ್ಯತ ವೇದಿಕೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News