ಹಾಜಿ ಅಬ್ದುಲ್ಲಾ ಸಾಹೇಬ್ಗೆ ಗೌರವ ಸಮರ್ಪಣೆ

Update: 2020-08-12 14:01 GMT

ಉಡುಪಿ, ಆ.12: ಉಡುಪಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿರುವ ಕಾರ್ಪೊರೇಷನ್ ಬ್ಯಾಂಕ್ ಸಂಸ್ಥಾಪಕ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬ್ ದಿವಂಗತರಾದ ದಿನದ ಪ್ರಯುಕ್ತ ಇಂದು ಅವರನ್ನು ದಫನಗೊಳಿಸಿದ ಜಾಗವನ್ನು ಸ್ವಚ್ಛಗೊಳಿಸಿ ಗೌರವ ಸಮರ್ಪಿಸಲಾಯಿತು.

ನಗರದ ಮೀನು ಮಾರುಕಟ್ಟೆ ಬಳಿ ಇರುವ ಮುಸ್ಲಿಂ ದಫನ ಭೂಮಿಯಲ್ಲಿ ಅವರನ್ನು ದಫನಗೊಳಿಸಿದ ಜಾಗವನ್ನು ಸ್ವಚ್ಛಗೊಳಿಸಿದ ವಿವಿಧ ಸಾಮಾಜಿಕ ಕಾರ್ಯಕರ್ತರು, ನಂತರ ಧರ್ಮಗುರು ಎಸ್‌ಡಿಪಿ ಜಮಾತ್‌ನ ವೌಲಾನ ಫಕ್ರೇ ಆಲಂ ಉಪಸ್ಥಿತಿುಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹ್ಮದ್, ಮೊಹಮ್ಮದ್ ಶಿಶ್, ನಾಸಿರ್ ಯಾಕೂಬ್, ಹಸನ್ ಸಾಬೇಹ್, ಮುತ್ತಾಕ್ ಅಲಿ, ರಫೀಕ್ ದೊಡ್ಡಣಗುಡ್ಡೆ, ಶಾಹಿಲ್ ರಹಮತುಲ್ಲಾ ಮುಹಮ್ಮದ್ ಆದಿಲ್, ಹಿಲರಿ ಜತ್ತನ್ನ, ಗ್ಲಾಡ್ಸನ್ ಜತ್ತನ್ನ, ಅಬಬ್ದ್ ಮುನಾಫ್, ರಾಮಾಂಜಿ, ಡಷ್ಮಂಡ್, ಸುಧೀರ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News