ಅಸಹಾಯ ಮಹಿಳೆಗೆ ಸಖಿ ಸೆಂಟರ್‌ನಲ್ಲಿ ಆಶ್ರಯ

Update: 2020-08-12 14:02 GMT

ಉಡುಪಿ, ಆ.12: ಉಡುಪಿ ನಗರದಲ್ಲಿ ಕೆಲವು ದಿನಗಳ ಹಿಂದೆ ರಕ್ಷಿಸಲ್ಪಟ್ಟು ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬೆಂಗಳೂರಿನ ಮಹಿಳೆಗೆ ನಿಟ್ಟೂರಿನಲ್ಲಿರುವ ಸಖಿ-ಒನ್-ಸ್ಟಾಪ್ ಸೆಂಟರ್‌ನಲ್ಲಿ ಬುಧವಾರ ಆಶ್ರಯ ಕಲ್ಪಿಸಲಾಯಿತು.

ಆ.7ರಂದು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿದ ಮಹಿಳೆಗೆ ಕೊರೋನ ಪರೀಕ್ಷೆ ಯಲ್ಲಿನ ಗೊಂದಲದಿಂದಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ದಲ್ಲಿ ಆಶ್ರಯ ನೀಡಲು ಅಧಿಕಾರಿಗಳು ನಿರಾಕರಿಸಿದ್ದರು. ನಂತರ ಆಕೆಯನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿತ್ತು.

 ಇದೀಗ ಮಹಿಳೆಗೆ ತುರ್ತು ಆಶ್ರಯ ಕಲ್ಪಿಸಲು ಜಿಲ್ಲಾ ಕಾನೂನು ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಕಾವೇರಿ ಸಹಕರಿಸಿದ್ದು, ಅದರಂತೆ ಆಕೆಗೆ ಸಖಿ ಸೆಂಟರ್‌ನಲ್ಲಿ ಆಶ್ರಯ ನೀಡಲಾಗಿದೆ ಎಂು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News