ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್‍ಗೆ ಮಾತೃ ವಿಯೋಗ

Update: 2020-08-12 17:38 GMT

ಮೂಡುಬಿದಿರೆ : ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಅವರ ತಾಯಿ ಮೂಡುಬಿದಿರೆ ಪುರಸಭೆಯ ಮಾಜಿ ಸದಸ್ಯೆ  ಸ್ವರಾಜ್ಯ ಮೈದಾನ ಮಾರಿಗುಡಿ ಬಳಿಯ ನಿವಾಸಿ ರಮೇಶ್ ಶಾಂತಿ ಅವರ ಪತ್ನಿ ಕಸ್ತೂರಿ (63) ಅವರು ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಕಸ್ತೂರಿ ಅವರಿಗೆ ಬುಧವಾರ ಬೆಳಗ್ಗೆ ಹೃದಯಾಘಾತವಾಗಿದ್ದು ಈ ಸಂದರ್ಭ ಅಲಂಗಾರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಅವರು ಸುದರ್ಶನ್ ಮೂಡುಬಿದಿರೆ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News