ಬೈಕ್‌ನಿಂದ ಬಿದ್ದು ಸಾವು

Update: 2020-08-13 17:21 GMT

ಪಡುಬಿದ್ರಿ, ಆ.13: ಸಂತೋಷ್ ಎಂಬವರು ಬುಧವಾರ ಸಂಜೆ 5:30ರ ಸುಮಾರಿಗೆ ತನ್ನ ಬೈಕ್‌ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮುದರಂಗಡಿ ಕಡೆಯಿಂದ ಎಲ್ಲೂರಿನತ್ತ ಚಲಾಯಿಸಿಕೊಂಡು ಬಂದು ಕುಕ್ಕಿಕಟ್ಟೆ ಜಂಕ್ಷನ್ ಬಳಿ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲಿನ ಹಿಂಬದಿ ಸಹ ಸವಾರರಾಗಿ ಕುಳಿತಿದ್ದ ಸಮಿತಾ ಶೆಟ್ಟಿ (50) ಆಯತಪ್ಪಿ ರಸ್ತೆಗೆ ಬಿದ್ದು, ತಲೆಗಾದ ಗಂಭೀರ ಗಾಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 11:30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News