ಸ್ಪಾತಂತ್ರ ದಿನದ ಬೃಹತ್ ಜಲವರ್ಣ ಕಲಾಕೃತಿ : ಕೊರೋನಾ ವಾರಿಯರ್ಸ್‌ಗೆ ಸಮರ್ಪಣೆ

Update: 2020-08-14 16:08 GMT

ಮಣಿಪಾಲ, ಆ.14: ಈ ಬಾರಿಯ ಸ್ವಾತಂತ್ರ ದಿನದ ಅಂಗವಾಗಿ ಮಣಿಪಾಲದ ಕಲಾವಿದ ಶ್ರೀನಾಥ್ ಮಣಿಪಾಲ ಇವರು ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಕೆಎಂಸಿ ಇಂಟರ್ಯಾಕ್ಟ್ ಆವರಣದಲ್ಲಿ ಬೃಹತ್ ಜಲವರ್ಣ ಕಲಾಕೃತಿಯನ್ನು ರಚಿ ಸಿದ್ದು, ಇದನ್ನು ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ಸೈನಿಕರಿಗೆ (ಕೊರೋನಾ ವಾರಿಯರ್ಸ್) ಸಮರ್ಪಿಸಿದ್ದಾರೆ.

ಕೆಎಂಸಿಯ ಡೀನ್ ಡಾ.ಶರತ್ ರಾವ್ ಕಲಾಕೃತಿಯನ್ನು ಅನಾವರಣಗೊಳಿಸಿ ದರು. ಸಮುದಾಯ ವೈದ್ಯಕೀಯ ವಿಭಾಗದ ಡಾ.ಸುಮಾ ನಾಯಕ್, ಡಾ.ವೀಣಾ ಕಾಮತ್, ಡಾ.ಈಶ್ವರಿ ಆಚಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಬೃಹತ್ ಕಲಾಕೃತಿಯು 320 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News