ದುಷ್ಕರ್ಮಿಗಳಿಂದ ಪಡುಕರೆ ಗ್ರಾಪಂ ಬಸ್ ನಿಲ್ದಾಣ ದ್ವಂಸ: ದೂರು

Update: 2020-08-14 16:46 GMT

ಮಲ್ಪೆ, ಆ.14: ಕಡೆಕಾರು ಗ್ರಾಪಂ ವ್ಯಾಪ್ತಿಯ ಪಡುಕರೆ ಕಡವಿನ ಬಳಿ ಪಂಚಾಯತ್ ವತಿಯಿಂದ ನಿರ್ಮಿಸಲಾದ ಬಸ್ ನಿಲ್ದಾಣವನ್ನು ದುಷ್ಕರ್ಮಿ ಗಳು ಕೆಡವಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.1ರಂದು ಪ್ರಭಾಕರ ಕುಂದರ್ ಪಡುಕರೆ ಮತ್ತು ಅವರ ಕೆಲಸಗಾರರು ತಂಗುದಾಣ ಕಟ್ಟಡವನ್ನು ಕೆಡವಿ ಸಂಪೂರ್ಣ ದ್ವಂಸಗೊಳಿಸಿದ್ದು, ನೌಕರರು ನೆಟ್ಟ ಭೂಮಿ ಗುರುತನ್ನು ನಾಶಮಾಡಿ ಭೂಮಿ ಗುರುತಿನ ಉಪಯುಕ್ತತೆಯನ್ನು ಕಡಿಮೆ ಮಾಡುವ ಕೃತ್ಯವನ್ನು ಮಾಡಿದ್ದಾರೆ. ಸರಕಾರಿ ಸೊತ್ತುಗಳ ನಾಶದಿಂದ ಸುಮಾರು 1,00,000 ರೂ. ನಷ್ಟ ಉಂಟಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News