ಗೂಡಂಗಡಿಯಲ್ಲಿ ಕಳವಿಗೆ ಯತ್ನ

Update: 2020-08-14 16:48 GMT

ಕಾಪು, ಆ.14: ಮೂಡಬೆಟ್ಟು ಗ್ರಾಮದ ಅಚ್ಚಡ ಎಂಬಲ್ಲಿ ಮುಖ್ಯಪ್ರಾಣ ಹೊಟೇಲ್ ಹತ್ತಿರ ಇರುವ ಗೂಡಂಗಡಿಯಲ್ಲಿ ಕಳವಿಗೆ ಯತ್ನಿಸಿರುವ ಘಟನೆ ಆ.13ರಂದು ರಾತ್ರಿ ವೇಳೆ ನಡೆದಿದೆ.

ಕೆಎ-20-ಇಪಿ-7460 ನಂಬರಿನ ಸ್ಕೂಟರಿನಲ್ಲಿ ಬಂದ ವ್ಯಕ್ತಿಯೊಬ್ಬ, ಕಟ ಪಾಡಿ ಕುಮೇರಿ ತೋಟದ ಸಂತೋಷ್ ಎಂಬವರ ಗೂಡಂಗಡಿಯ ಬಾಗಿಲು ಮುರಿದು ಕಳವಿಗೆ ಯತ್ನಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ತಿಳಿದು ಸಂತೋಷ್ ಸ್ಥಳಕ್ಕೆ ಧಾವಿಸಿದಾಗ ಆರೋಪಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News