ಗಣೇಶ ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 08:27 GMT

ವಿಟ್ಲ, ಆ.15: ನೇರಳಕಟ್ಟೆಯ  ಗಣೇಶ ನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಗಣೇಶ ನಗರದಲ್ಲಿ ಆಚರಿಸಲಾಯಿತು.

ನೆಟ್ಲಮುಡ್ನೂರು ಗ್ರಾಮದ ಕೊರೋನ ಯೋಧೆ ಆಶಾ ಕಾರ್ಯಕರ್ತೆ ಮಮತಾ ಮೀನಾವು ದ್ವಜಾರೋಹಣಗೈದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಭೋಜ ನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಮಾಜಿ ಗೌರವಾಧ್ಯಕ್ಷ ಅನಂತ ಪ್ರಭು ಸಂದೇಶ ಭಾಷಣಗೈದರು.

ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ, ನಿವೃತ ಮುಖ್ಯ ಶಿಕ್ಷಕರಾದ ರಾಮಚಂದ್ರ ಮಾಸ್ಟರ್, ಲಕ್ಷ್ಮೀ ಟೀಚರ್, ಚಂದ್ರಶೇಖರ, ರಾಜೀವ ಬಿಂದು, ರಾಜೇಶ ಕರುವನ್, ಡಾ.ಗಣರಾಜ ಎಲ್ಕಣ, ರವಿ ನ್ಯಾಕ್, ಪ್ರಶಾಂತ, ಕಿರಣ್, ಶರತ್ ಮೊದಲಾದವರು ಉಪಸ್ಥಿತರಿದ್ದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News