ಕೊಲ್ಲರಕೋಡಿ: ಡಿವೈಎಫ್ಐ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 13:30 GMT

ಕೊಲ್ಲರಕೋಡಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಡಿವೈಎಫ್ಐ ಕೊಲ್ಲರಕೋಡಿ ಘಟಕ ಮತ್ತು ಮೊಂಟೆಪದವು ಘಟಕದ ಜಂಟಿ ಆಶ್ರಯದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕು ರಕ್ಷಿಸಿ ಭಾರತ ಉಳಿಸಿ 'ಸ್ವಾತಂತ್ರ್ಯ ದಿನದ ಸಂಕಲ್ಪ' ಕಾರ್ಯಕ್ರಮ ಕೊಲ್ಲರಕೋಡಿಯಲ್ಲಿ ನಡೆಯಿತು. 

ದ್ವಜಾರೋಹಣವನ್ನು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಡಿವೈಎಫ್ಐ ಉಳ್ಳಾಲ ವಲಯ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಡಿವೈಎಫ್ಐ ಮೊಂಟೆಪದವು ಘಟಕಾಧ್ಯಕ್ಷ ಸಿರಾಜ್ ಬಿಎಂ, ಡಿವೈಎಫ್ಐ ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಝ್, ರಾಣಿ ಅಬ್ಬಕ ಬಸ್ ನೌಕರರ ಸಂಘದ ಕಾರ್ಯದರ್ಶಿ ದಿವಾಕರ, ಡಿವೈಎಫ್ಐ ಮುಡಿಪು ಘಟಕಾಧ್ಯಕ್ಷ ರಝಾಕ್ ಮುಡಿಪು ಪಾಲ್ಗೊಂಡಿದ್ದರು.

ಈ ಸಂದರ್ಭ ಕೊಲ್ಲರಕೋಡಿ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಪಾರೆ, ಡಿವೈಎಫ್ಐ ಕೊಲ್ಲರಕೋಡಿ ಅಧ್ಯಕ್ಷ ಆಸೀಫ್ ಕೆಎಚ್, ಡಿವೈಎಫ್ಐ ಕೊಲ್ಲರಕೋಡಿ ಕಾರ್ಯದರ್ಶಿ ನೌಶಿಫ್, ಕೊಲ್ಲರಕೋಡಿ ಡಿವೈಎಫ್ಐ ಮುಖಂಡ ಶರೀಫ್, ಮೊಯ್ದಿನ್ ಕುಂಞಿ ಕೆಐ, ಇಕ್ಬಾಲ್ ಎಸ್.ಎಚ್ ಉಪಸ್ಥಿತರಿದ್ದರು.

ಅಮೀರ್ ಚೌಕ ಸ್ವಾಗತಿಸಿ, ರಝಾಕ್ ಮೊಂಟೆಪದವು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News