ಉಡುಪಿ ಜಾಮೀಯ ಮಸೀದಿಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ
Update: 2020-08-15 14:57 GMT
ಉಡುಪಿ, ಆ.15: ಉಡುಪಿಯ ಜಾಮಿಯಾ ಮಸೀದಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಕಾಪು ತಹಶೀಲ್ದಾರ್ ಮುಮ್ಮದ್ ಇಸ್ಹಾಕ್ ನೆರವೇರಿಸಿದರು.
ಜಾಮಿಯಾ ಮಸೀದಿಯ ಧರ್ಮಗುರು ಮೌಲಾನಾ ರಶೀದ್ ಅಹ್ಮದ್ ನದ್ವಿ ಸ್ವಾತಂತ್ರ್ಯದ ಮಹತ್ವ ಮತ್ತು ನಮ್ಮ ಪೂರ್ವಜರು ಅದನ್ನು ನಮಗೆ ದೊರಕಿಸಿಕೊಟ್ಟ ಇತಿಹಾಸವನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಅರ್ಷದ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಉಮರ್ ವಿ.ಎಸ್., ಮಸೀದಿಯ ಆಡಳಿತ ಸಮಿತಿ ಸದಸ್ಯರು, ಮಸೀದಿಯ ಜಮಾಅತಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ರಿಯಾಝ್ ಅಹ್ಮದ್ ವಂದಿಸಿದರು.