ಡಿವೈಎಫ್ಐ : ಕೊಲ್ಲರಕೋಡಿ, ಮೊಂಟೆಪದವು ಘಟಕದಿಂದ 'ಸ್ವಾತಂತ್ರ್ಯ ದಿನದ ಸಂಕಲ್ಪ' ಕಾರ್ಯಕ್ರಮ

Update: 2020-08-15 16:54 GMT

ಕೊಲ್ಲರಕೋಡಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಡಿವೈಎಫ್ಐ ಕೊಲ್ಲರಕೋಡಿ ಘಟಕ ಮತ್ತು ಮೊಂಟೆಪದವು ಘಟಕ ಜಂಟಿ ಆಶ್ರಯದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕು ರಕ್ಷಿಸಿ ಭಾರತ ಉಳಿಸಿ 'ಸ್ವಾತಂತ್ರ್ಯ ದಿನದ ಸಂಕಲ್ಪ' ಕಾರ್ಯಕ್ರಮ ಕೊಲ್ಲರಕೋಡಿಯಲ್ಲಿ ನಡೆಯಿತು. 

ದ್ವಜಾರೋಹಣವನ್ನು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಲ್ಲ ಅವರು ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಡಿವೈಎಫ್ಐ ಉಳ್ಳಾಲ ವಲಯ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಡಿವೈಎಫ್ಐ ಮೊಂಟೆಪದವು ಘಟಕಾಧ್ಯಕ್ಷ ಸಿರಾಜ್ ಬಿಎಂ, ಡಿವೈಎಫ್ಐ ದೇರಳಕಟ್ಟೆ ಘಟಕ ಅಧ್ಯಕ್ಷ ನವಾಜ್, ರಾಣಿ ಅಬ್ಬಕ  ಬಸ್ ನೌಕರರ ಸಂಘದ  ಕಾರ್ಯದರ್ಶಿ ದಿವಾಕರ, ಡಿವೈಎಫ್ಐ ಮುಡಿಪು ಘಟಕಾಧ್ಯಕ್ಷ ರಝಕ್ ಮುಡಿಪು ಆಗಮಿಸಿದರು.

ಈ ಸಂದರ್ಭ ಕೊಲ್ಲರಕೊಡಿ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಪಾರೆ, ಡಿವೈಎಫ್ಐ ಕೊಲ್ಲರಕೊಡಿ ಅಧ್ಯಕ್ಷ ಆಸೀಫ್ ಕೆಎಚ್,  ಡಿವೈಎಫ್ಐ ಕೊಲ್ಲರಕೊಡಿ ಕಾರ್ಯದರ್ಶಿ ನೌಶಿಫ್, ಕೊಲ್ಲರಕೋಡಿ ಡಿವೈಎಫ್ಐ ಮುಖಂಡ  ಶರೀಫ್, ಮೊಯ್ದಿನ್ ಕುಂಞಿ ಕೆಐ ಉಪಸ್ಥಿತರಿದ್ದರು.

ಅಮೀರ್ ಚೌಕ ಸ್ವಾಗತಿಸಿ, ರಝಾಕ್ ಮೊಂಟೆಪದವು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News