ಕಾನತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

Update: 2020-08-15 17:25 GMT

ವಿಟ್ಲ : ಸಮೀಪದ ಕಾನತ್ತಡ್ಕ ಶ್ರೀಕೃಷ್ಣ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಉಕ್ಕುಡ ಪಬ್ಲಿಕ್ ಸ್ಕೂಲ್ ಜತೆಕಾರ್ಯದರ್ಶಿ ಹಾಗೂ ಹಳೆ ವಿದ್ಯಾರ್ಥಿ ಮುನೀರ್ ದರ್ಬೆ ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ವಿಶ್ವನಾಥ ಅಧ್ಯಕ್ಷತೆ ವಹಿಸಿದರು.

ವಿಟ್ಲ ಜೇಸಿಐ ಪೂರ್ವಾಧ್ಯಕ್ಷರಾದ ರಶೀದ್ ವಿಟ್ಲ, ಕತಾರ್ ಉದ್ಯಮಿ ಹಾರಿಸ್ ಕಾನತ್ತಡ್ಕ, ಮುರ್ಶಿದುಲ್ ಅನಾಮ್ ಅಧ್ಯಕ್ಷರಾದ ಹನೀಫ್ ಕುದ್ದುಪದವು, ಅಂಗನವಾಡಿ ಕಾರ್ಯಕರ್ತರಾದ ಶಾಂತಿ, ಮಹಮೂದ್ ಕಾನತ್ತಡ್ಕ, ಸಾದಿಕ್ ಕಾನತ್ತಡ್ಕ ಉಪಸ್ಥಿತರಿದ್ದರು. ಶಿಕ್ಷಕರಾದ ಐತಪ್ಪ ನಾಯ್ಕ್ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News