ಆಪತ್ಬಾಂಧವ ಸೈಕೋ ರೆಹಬಿಲಿಟೇಶನ್ ಸೆಂಟರ್ನಲ್ಲಿ ಸ್ವಾತಂತ್ರೋತ್ಸವ
Update: 2020-08-15 17:41 GMT
ಮಂಗಳೂರು, ಆ.15: ಇಲ್ಲಿನ ಮೂಲ್ಕಿ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಮೈಮುನಾ ಫೌಂಡೇಶನ್ ಆಪತ್ಬಾಂಧವ ಸೈಕೋ ರೆಹಬಿಲಿಟೇಶನ್ ಸೆಂಟರ್(ರಿ)ನ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಸೆಂಟರ್ನಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ವಿಶ್ವ ಬಂಟರ ಸಂಘದ ಉಪಾಧ್ಯಕ್ಷರು ಕರ್ನಿರೆ ವಿಶ್ವನಾಥ ಶೆಟ್ಟಿ, ಎಸ್ಡಿಪಿಐ ರಾಜ್ಯ ಸಮಿತಿಯ ಸದಸ್ಯ ರಿಯಾಝ್ ಫರಂಗಿಪೇಟೆ, ವಿಶ್ವಾಸ್ ಎಸ್ಟೇಟ್ ಪಾಲುದಾರರು ಸುಲೇಮಾನ್ ಶೇಕ್ ಬೆಲ್ವಾಯಿ ಧ್ವಜಾರೋಹನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಕಾರ್ನಾಡ್, ಎಸ್ಡಿಪಿಐ ಸ್ಥಳೀಯ ಮುಖಂಡ ಶರೀಫ್ ಕೊಲ್ನಾಡ್, ಮೈಮುನಾ ಫೌಂಡೇಶನ್(ರಿ) ಇದರ ಚೇರ್ಮನ್ ಆಸೀಫ್ ಆಪದ್ಬಾಂಧವ, ಕೋಶಾಧಿಕಾರಿ ಅಫ್ತಾಬ್ ಬಂದರ್, ರಿಜಿಸ್ಟ್ರಾರ್ ಹಾಗೂ ಹಲವುರ ಉಪಸ್ಥತಿತರಿದ್ದರು.