ಕಿನ್ನಿಗೋಳಿ ಮುಹಮ್ಮದೀಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
Update: 2020-08-15 17:42 GMT
ಮಂಗಳೂರು, ಆ.15: ಇಲ್ಲಿನ ಕಿನ್ನಿಗೋಳಿ ಪುನರೂರಿನ ಮುಹಮ್ಮದೀಯಾ ಜುಮ್ಮಾ ಮಸೀದಿ ವತಿಯಿಂದ ಮಸೀದಿಯ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಶ್ರಫ್ ರಝಾ ಅಂಜದಿ ಧ್ವಜಾರೋಹಣಗೈದು ಸ್ವಾತಂತ್ರ್ಯದ ಸಂದೇಶವನ್ನ ನೀಡಿದರು. ಈ ಸಂದರ್ಭ ಮಸೀದಿ ಅಧ್ಯಕ್ಷ ಸಿದ್ದೀಕ್ ಪುನರೂರು, ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಮಿಲನ್, ಉಪಾಧ್ಯಕ್ಷ ಇಕ್ಬಾಲ್ ಸಾಹೇಬ್, ಖತೀಬರಾದ ಬಶೀರ್ ಮದನಿ, ಕಾರ್ಯದರ್ಶಿ ಶೇಖ್ ಇಬ್ರಾಹಿಂ, ಕಿನ್ನಿಗೋಳಿ ಜುಮ್ಮಾ ಮಸೀದಿ ಅಧ್ಯಕ್ಷ ರಫೀಕ್ ಫ್ಲವರ್ ಗೋಳಿಜೋರ, ಉಮರ್ ಅಸದಿ, ಅಫ್ತಾಬ್ ಪುನರೂರು, ಶಾಹಿದ್ ಪುನರೂರು, ಶಂಶೀರ್ ಗೋಳಿಜೋರ ಮತ್ತಿತ್ತರರು ಉಪಸ್ಥಿತರಿದ್ದರು.