ಅಮ್ಟೂರು : ಎಸ್ ಡಿ ಪಿ ಐ ವತಿಯಿಂದ ಅಯುಷ್ಮಾನ್ ಕಾರ್ಡ್ ಅಭಿಯಾನ

Update: 2020-08-15 17:46 GMT

ಅಮ್ಟೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಮ್ಟೂರು, ಕೆದಿಲ ವಲಯ ವತಿಯಿಂದ ಅಯುಷ್ಮಾನ್ ಕಾರ್ಡ್ ಅಭಿಯಾನ ನಡೆಸಲಾಯಿತು.

ಗೋಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯ ಯುಸುಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಾರು 160ರಷ್ಟು ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಅಮ್ಟೂರು ಗ್ರಾಮ ಸಮಿತಿ ಅಧ್ಯಕ್ಷರಾದ ರಹೀಮ್ ಕರಿಂಗಾಣ, ಎಸ್.ಡಿ.ಪಿ.ಐ ಗೋಳ್ತಮಜಲ್ ಗ್ರಾಮ ಸಮಿತಿ ಅಧ್ಯಕ್ಷರಾದ ಜವಾಜ್ ಕಲ್ಲಡ್ಕ ಹಾಗೂ ಸದಸ್ಯರಾದ ಮುಝಮ್ಮಿಲ್ ಗೊಳ್ತಮಜಲ್, ಎಸ್.ಡಿ.ಪಿ.ಐ ಅಮ್ಟೂರು ಬ್ರಾಂಚ್ ನ ಸದಸ್ಯರಾದ ತಾಬಿಸ್ ಅಮ್ಟೂರು, ಜಲೀಲ್ ಕೆದಿಲ, ಬಶೀರ್ ಕೆದಿಲ, ಮಸೂದ್ ಕೆದಿಲ, ತಫ್ಸೀರ್ ಅಮ್ಟೂರು, ನಾಸಿರ್ ಕೆದಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News