ಅಳಕೆ ಜುಮಾ ಮಸೀದಿ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 18:01 GMT

ಬೆಳ್ತಂಗಡಿ: ಕಲ್ಲೇರಿ ತಣ್ಣೀರುಪಂತ ಗ್ರಾಮದ ಅಳಕೆ ರಹ್ಮಾನಿ ಜುಮಾ ಮಸೀದಿ ವಠಾರದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.

ಜಮಾಅತ್ ಖತೀಬ್ ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ನಾವೂರ್ ರವರ ಪ್ರಾರ್ಥನೆ ನಡೆಸಿದರು. ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ರವರು ಧ್ವಜರೋಹಣದ ನೆರವೇರಿಸಿದರು.

ಕಾರ್ಯಕ್ರಮವನ್ನು ಸದರ್ ಮುಅಲ್ಲಿಂ ಮುಸ್ತಫಾ ಹಿಮಮಿ ಪರಪ್ಪು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್ ಬಿಎಸ್ ಪ್ರಧಾನ ಕಾರ್ಯದರ್ಶಿ ಶಮೀರ್, ಹಾಗೂ ಉಕ್ಕುಡ ಮುಹಿಸ್ಸುನ್ನ ದ‌ಅ್‌ವಾ ವಿದ್ಯಾರ್ಥಿ ಟಿಪ್ಪು ಸುಲ್ತಾನ್ ಅಳಕೆ ದಿಕ್ಸೂಚಿ ಭಾಷಣ ಮಾಡಿದರು. ಮಸ್‌ಊದ್, ಶಿಫಾನ್ ಹಾಡು ಹಾಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ರಫೀಖ್, ಕೋಶಾಧಿಕಾರಿ ಹುಸೈನ್ ಹಾಜಿ, ಎಸ್ಸೆಸ್ಸೆಫ್ ಅಧ್ಯಕ್ಷ ಗಫೂರ್, ಪ್ರಧಾನ ಕಾರ್ಯದರ್ಶಿ ಶಮೀರ್, ಮದ್ರಸ ಅಧ್ಯಾಪಕರಾದ ಅಬ್ದುರ್ರಝಾಖ್ ಸಖಾಫಿ, ಅಬ್ದುರ್ರಝಾಖ್ ಮದನಿ, ಎಸ್ ಬಿಎಸ್ ಅಧ್ಯಕ್ಷ ಇಸ್ಮಾಯಿಲ್ ಕೆ ಹಾಗೂ ಎಸ್ವೈಸ್, ಎಸ್ಸೆಸ್ಸೆಫ್, ಎಸ್ ಬಿಎಸ್ ಕಾರ್ಯಕರ್ತರು ಹಾಗೂ ಜಮಾಅತ್ ಸದಸ್ಯರು ಭಾಗವಹಿಸಿದ್ದರು.

ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಪುಂಡಿಕ್ಕು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News