ಎಸ್ ಡಿ ಪಿ ಐ : ಸೋಮೇಶ್ವರ, ಕೋಟೆಕಾರ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2020-08-15 18:03 GMT

ಮಂಗಳೂರು : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್ ಡಿ ಪಿ ಐ ಸೋಮೇಶ್ವರ ವಲಯ ಸಮಿತಿ ಮತ್ತು ಕೋಟೆಕಾರ್ ಪಟ್ಟಣ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ವನ್ನು ಉಚ್ಚಿಲ ಗುಡ್ಡೆ ಜಂಕ್ಷನ್ನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಹಿರಿಯರಾದ ಎಂ ಎಚ್ ￰ಪೋಕರ್ ಕುಂಞಿ ಧ್ವಜಾರೋಹಣ ವನ್ನು ನೆರವೇರಿಸಿದರು. ಎಸ್ ಡಿ ಪಿ ಐ ಸೋಮೇಶ್ವರ ವಲಯ ಸಮಿತಿ ಅಧ್ಯಕ್ಷರಾದ  ಮೊಯಿದಿನ್ ಕುಟ್ಟಿ ಮತ್ತು ಎಸ್ ಡಿ ಪಿ ಐ ಅಜ್ಜಿನಡ್ಕ ಕೋಶಾಧಿಕಾರಿ ಇಬ್ರಾಹಿಂ ಉಚ್ಚಿಲ ಗುಡ್ಡೆ  ಇವರು ಭಾಷಣ ವನ್ನು ನಡೆಸಿದರು. ಸಂಶುದ್ದೀನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರೆ, ನಜೀರ್ ಉಚ್ಚಿಲ್ ವಂದಿಸಿದರು.

ಕಾರ್ಯಕ್ರಮದಲ್ಲಿ ಕೋಟೆಕಾರ್  ಪಟ್ಟಣ ಪಂಚಾಯತ್ ಸದಸ್ಯರಾದ ಜುಲೇಖಾ ಬಶೀರ್, ಎಸ್ ಡಿ ಟಿ ಯು ಮಂಗಳೂರು ಕ್ಷೇತ್ರ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ, ಬಿಎಸ್ ಟಿ ಬಾವ, ನಾಸಿರ್ ಖಾನ್, ಹಕೀಮ್ ಕೆಸಿರೋಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News