×
Ad

ಐದು ತಿಂಗಳ ಬಳಿಕ ಇಂದು ವೈಷ್ಣೋದೇವಿ ಯಾತ್ರೆ ಪುನರಾರಂಭ

Update: 2020-08-16 11:07 IST

ಹೊಸದಿಲ್ಲಿ, ಆ.16: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿರುವ  ವೈಷ್ಣೋದೇವಿ ಗುಹ ದೇಗುಲ ಸುಮಾರು ಐದು ತಿಂಗಳ ಬಳಿಕ ರವಿವಾರ ಯಾತ್ರಿಕರಿಗೆ ಮುಕ್ತವಾಗಿದೆ.

ಕೋವಿಡ್-19 ಕಾರಣಕ್ಕೆ ಮಾರ್ಚ್ 18ರಂದು ದೇಗುಲವನ್ನು ಮುಚ್ಚಲಾಗಿತ್ತು.

"ಮೊದಲ ವಾರ ಪ್ರತಿ ದಿನ 2,000 ಯಾತ್ರಿಕರಿಗೆ ದೇಗುಲ ಪ್ರವೇಶಿಸಲು ಅವಕಾಶ ನೀಡಲಾಗುವುದು. ಜಮ್ಮು-ಕಾಶ್ಮೀರದ 1,900 ಯಾತ್ರಿಕರು ಹಾಗೂ ಬೇರೆ ಸ್ಥಳಗಳಿಂದ ಬರುವ 100 ಯಾತ್ರಿಕರಿಗೆ ಅವಕಾಶ ನೀಡಲಾಗುವುದು. ಪರಿಸ್ಥಿತಿಯನ್ನು ಪರಾಮರ್ಶಿಸಲಾಗುವುದು. ಕ್ರಮಬದ್ಧವಾಗಿ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಶನಿವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News