ಸಹಕಾರ ಸಂಘದ ಕಾರ್ಯದರ್ಶಿಯಿಂದ ವಂಚನೆ: ದೂರು

Update: 2020-08-16 15:33 GMT

ಕೊಲ್ಲೂರು, ಆ.16: ತಪ್ಸೆಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ರಂಜಿತ್, ಸಂಘದ ಲಕ್ಷಾಂತರ ರೂ. ಹಣವನ್ನು ದುರು ಪಯೋಗ ಮಾಡಿ ವಂಚಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘದಲ್ಲಿ 2017ರ ಮಾರ್ಚ್‌ನಿಂದ 2019ರ ಎಪ್ರಿಲ್‌ವರೆಗಿನ ಅವಧಿ ಯಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ರಂಜಿತ್ ಎಂ.ವಿ., ಸಂಘಕ್ಕೆ ಒಟ್ಟು 2,10,497.69ರೂ. ಹಣವನ್ನು ದುರುಪಯೋಗ ಮಾಡಿ ವಂಚಿಸಿರುವುದು 2018-19ನೆ ಸಾಲಿನ ಲೆಕ್ಕ ಪರಿಶೋಧನ ವರದಿಯಲ್ಲಿ ತಿಳಿದು ಬಂದಿದೆ ಎಂದು ಕಾರ್ಯದರ್ಶಿ ಗಣೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News