ಪಂಜಾಬ್ ಸಂಪುಟ ಸಚವರಿಗೆ ಕೊರೋನ ಸೋಂಕು
Update: 2020-08-16 16:09 GMT
ಚಂಡಿಗಢ, ಆ. 16: ಪಂಜಾಬ್ನ ಸಂಪುಟ ಸಚಿವ ಗುರುಪ್ರೀತ್ ಕಂಗಾರ್ಗೆ ಕೊರೋನ ಸೋಂಕು ರವಿವಾರ ದೃಢಪಟ್ಟಿದೆ.
ವಿದ್ಯುತ್, ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಂಪುಟ ಸಚಿವ ಗುರುಪ್ರೀತ್ ಕಂಗಾರ್ ಅವರು ಮಾನ್ಸಾದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೆ ಪಾಲ್ಗೊಂಡಿದ್ದರು. ಅಂದು ಅವರು ಕೊರೋನ ವೈರಸ್ ವಿರುದ್ಧ ಹೋರಾಡುವ ದಿಶೆಯಲ್ಲಿ ಮಾಸ್ಕ್ನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದರು. ಆದರೆ, ಅವರೇ ಮಾಸ್ಕ್ ಧರಿಸಿರಲಿಲ್ಲ. ಅವರ ಸೊಸೆಗೆ ಕೂಡ ಕೊರೋನ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಅವರ ಸಂಪರ್ಕಕ್ಕೆ ಬಂದ ಎಲ್ಲರೂ ಐಸೋಲೇಶನ್ಗೆ ಒಳಗಾಗುವಂತೆ ಗುರುಪ್ರೀತ್ ಕಂಗಾರ್ ವಿನಂತಿಸಿದ್ದಾರೆ. ಈ ಹಿಂದೆ ಪಂಜಾಬ್ನ ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಸಂಪುಟ ಸಚಿವ ತ್ರಿಪಾಠ್ ರಾಜೀಂದರ್ ಸಿಂಗ್ ಬಜ್ವಾ ಅವರಿಗೆ ಕೊರೋನ ಸೋಂಕು ದೃಢಪಟ್ಟಿತ್ತು.