ಪತ್ರಕರ್ತ ಪ್ರಶಾಂತ್ ಕನೋಜಿಯಾರನ್ನು ಬಂಧಿಸಿದ ಉ.ಪ್ರದೇಶ ಪೊಲೀಸರು
Update: 2020-08-18 16:26 GMT
ಹೊಸದಿಲ್ಲಿ: ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಪತ್ರಕರ್ತ ಪ್ರಶಾಂತ್ ಕನೋಜಿಯಾರನ್ನು ಇಂದು ಬಂಧಿಸಿದ್ದಾರೆ.
ಇಂದು ಮಧ್ಯಾಹ್ನ 1:30ರ ವೇಳೆಗೆ ಅವರನ್ನು ಬಂಧಿಸಲಾಗಿದೆ ಎಂದು ಕನೋಜಿಯಾರ ಪತ್ನಿ ಜಗೀಶ್ ಅರೋರಾ ಮಾಹಿತಿ ನೀಡಿದ್ದಾರೆ. “ಅವರು ಸುಮಾರು 5ರಿಂದ 6 ಮಂದಿ ಇದ್ದರು. ಅದರಲ್ಲಿ ಒಬ್ಬ ಮಾತ್ರ ಸಮವಸ್ತ್ರದಲ್ಲಿದ್ದರು. ಯಾವ ಕಾರಣಕ್ಕಾಗಿ ಬಂಧಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಅವರು ಮೊದಲು ನೀಡಿರಲಿಲ್ಲ” ಎಂದವರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಕನೋಜಿಯಾ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ದಿನೇಶ್ ಕುಮಾರ್ ಶುಕ್ಲಾ ಎಂಬವರು ದಾಖಲಿಸಿರುವ ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ.
ಕನೋಜಿಯಾ ಅವರು ‘ಹಿಂದೂ ಆರ್ಮಿ’ ನಾಯಕ ಸುಶೀಲ್ ಕುಮಾರ್ ಎಂಬಾತನ ಕುರಿತು ಟ್ವೀಟ್ ಒಂದನ್ನು ಮಾಡಿದ್ದರು ಎನ್ನಲಾಗಿದೆ.