ವಿದ್ಯುತ್ ಆಘಾತದಿಂದ ಯುವಕ ಸಾವು
Update: 2020-08-19 16:10 GMT
ಗಂಗೊಳ್ಳಿ, ಆ.19: ಮನೆಯ ಪ್ರಿಡ್ಜ್ ರಿಪೇರಿ ಮಾಡುತಿದ್ದ ವೇಳೆ ಅಕಸ್ಮಿಕ ವಾಗಿ ವಿದ್ಯುತ್ ಶಾಕ್ ತಗಲಿ ಯುವಕರೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಕುಂಬಾರಮಕ್ಕಿ ಎಂಬಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ರಾಘವೇಂದ್ರ (30) ಎಂದು ಗುರುತಿಸಲಾಗಿದೆ. ಇಲೆಕ್ಟ್ರೀಷಿಯನ್ ಹಾಗೂ ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದ ಇವರು ಆ.18ರ ಸಂಜೆ 6:45ರ ಸುಮಾರಿಗೆ ಮನೆಯಲ್ಲಿ ವಿದ್ಯುತ್ ಸರಿ ಇಲ್ಲದ ಕಾರಣ ಪ್ರಿಡ್ಜ್ ಬಳಿ ರಿಪೇರಿ ಮಾಡುತಿದ್ದಾಗ ಅಕಸ್ಮಿಕವಾಗಿ ವಿದ್ಯುತ್ ಶಾಕ್ ತಗಲಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.