ಶಶಿ ತರೂರ್, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆಯಿಂದ ಹಕ್ಕುಚ್ಯುತಿ ನೋಟಿಸ್

Update: 2020-08-19 16:43 GMT

ಹೊಸದಿಲ್ಲಿ: ಫೇಸ್ ‌ಬುಕ್ ಬಿಜೆಪಿ ನಾಯಕರ ಪರ ಧೋರಣೆ ಹೊಂದಿದೆ ಎನ್ನುವ ಆರೋಪಗಳ ಬಗ್ಗೆ ಚರ್ಚಿಸಲು ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಕರೆದ ಕಾಂಗ್ರೆಸ್ ಸಂಸದ, ಸಂಸದೀಯ ಸಮಿತಿಯ ಅಧ್ಯಕ್ಷ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.

ತನ್ನ ವಿರುದ್ಧ ನಿಶಿಕಾಂತ ದುಬೆ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಶಶಿ ತರೂರ್ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ ನಂತರ ದುಬೆ ಈ ಕ್ರಮ ಕೈಗೊಂಡಿದ್ದಾರೆ.

ಶಶಿ ತರೂರ್ ಮತ್ತು ರಾಹುಲ್ ಅವರು “ಸಭ್ಯತೆ, ನೈತಿಕತೆ ಮತ್ತು ಸಂಸದೀಯ ಪ್ರಕ್ರಿಯೆಗಳ ಮೂಲ ಸಿದ್ಧಾಂತದ ಮಿತಿಗಳನ್ನು ಮೀರಿದ್ದಾರೆ” ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News