ತೋಡಿಗೆ ಬಿದ್ದು ಕೂಲಿ ಕಾರ್ಮಿಕ ಮೃತ್ಯು
Update: 2020-08-21 21:29 IST
ಉಡುಪಿ, ಆ.21: ಉಡುಪಿ ಬನ್ನಂಜೆ ಗರಡಿ ರಸ್ತೆಯ ನೀರಿನ ತೋಡಿಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಆ.20ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಹನುಮಪ್ಪನಿಂಬಲಗುಂದಿ(32) ಎಂದು ಗುರುತಿಸಲಾಗಿದೆ. ನಿಟ್ಟೂರು ರಸ್ತೆಯ ಶನೇಶ್ವರ ದೇವಸ್ಥಾನದ ಬಳಿ ಬಾಡಿಗೆ ಶೆಡ್ನಲ್ಲಿ ವಾಸವಾಗಿ ರುವ ಇವರು, ಕಿರು ಸೇತುವೆಯ ತೋಡಿನ ನೀರಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.