ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಕೈಕಂಬ ವಲಯ ಸಮಿತಿ ರಚನೆ

Update: 2020-08-24 07:13 GMT

ಗುರುಪುರ/ ಕೈಕಂಬ : ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ವಲಯ ಸಮಿತಿ ರಚನಾ ಕಾರ್ಯಕ್ರಮವು ಕೈಕಂಬಾ ವಲಯ ಸ್ವಾಗತ ಸಮಿತಿ ಕಚೇರಿಯಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಅರಿಫ್ ಕಮ್ಮಾಜೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಖಾಯ ದ.ಕ ಜಿಲ್ಲಾ ವೈಸ್ ಚೈರ್ಮೆನ್  ಇಬ್ರಾಹಿಮ್ ಕುಕ್ಕಟ್ಟೆ, ಕೈಕಂಬ ವಲಯ ವರ್ಕಿಂಗ್ ಕಾರ್ಯದರ್ಶಿ ಅಬ್ಬಾಸ್ ನಾಡಾಜೆ ಉಪಸ್ಥಿತರಿದ್ದರು.

ಟ್ರೆಂಡ್  ಕೈಕಂಬ ವಲಯ ನೂತನ ಸಮಿತಿಯನ್ನು ರಚಿಸಲಾಯಿತು. ಟ್ರೆಂಡ್ ಉಸ್ತುವಾರಿ ಕಾರ್ಯದರ್ಶಿ ಅಬ್ದುಲ್ ಸಲಾಂ ಅಡ್ಡೂರು, ಚೈರ್ಮೆನ್ ಮುಹಮ್ಮದ್ ನಿಯಾಝ್ ಕರಿಯಂಗಳ, ವೈಸ್ ಚೈರ್ಮೆನ್ ಶಂಸುದ್ದೀನ್  ಬಡಕಬೈಲ್, ಕನ್ವೀನರ್ ಜಾಫರ್ ಬಂಗ್ಲ ಗುಡ್ಡೆ, ವೈಸ್ ಕನ್ವೀನರ್ ನಝೀಮ್ ಗುರುಪುರ, ವರ್ಕಿಂಗ್ ಕನ್ವೀನರ್ ಮೊಹಮ್ಮದ್ ಅಝ್ಮಲ್ ಗುರುಪುರ, ಕೋಶಾಧಿಕಾರಿ ಅಸ್ಲಾಂ ಕೊಳ್ತಮಜಲ್, ವರ್ಕಿಂಗ್ ಸದಸ್ಯರು ಉನೈಸ್ ಮಳಲಿ, ಮೊಹಮ್ಮದ್ ವಾರಿಸ್ ನಾಡಾಜೆ, ಶಮ್ಮಿ ಅಮ್ಮುಂಜೆ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಅಬ್ದುಲ್ ಸಲಾಂ ಅಡ್ಡೂರು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News