ಎಸ್.ವೈ.ಎಸ್ ಫರಂಗಿಪೇಟೆ ವತಿಯಿಂದ ಅಲ್ ಉಸ್ರತುತ್ತಯ್ಯಿಬ ಕಾರ್ಯಕ್ರಮ

Update: 2020-08-25 17:31 GMT

ಬಂಟ್ವಾಳ: ಎಸ್.ವೈ.ಎಸ್ ಪರಂಗಿಪೇಟೆ ವತಿಯಿಂದ ಎಸ್.ವೈ.ಎಸ್ ಬ್ರಾಂಚ್ ವ್ಯಾಪ್ತಿಯ ಮನೆಗಳಲ್ಲಿ ತಿಂಗಳಿಗೊಮ್ಮೆ ನಡೆಸುವ ಅಲ್ ಉಸ್ರತುತ್ತಯ್ಯಿಬ ಸಂತುಷ್ಟ ಕುಟುಂಬ ಎಂಬ ಕಾರ್ಯಕ್ರಮ ಬಗ್ಗೆ ಸುನ್ನೀ ಸೆಂಟರ್ ತುಂಬೆಯಲ್ಲಿ ಸಭೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವೈ.ಎಸ್ ಸೆಂಟರ್ ಅಧ್ಯಕ್ಷ ಅಬ್ದು ಲ್ಲತೀಫ್ ಮುಸ್ಲಿಯಾರ್ ವಹಿಸಿದರು. ಕಾರ್ಯಕ್ರಮವನ್ನು ಎಸ್.ವೈ.ಎಸ್ ದಅವಾ ಮತ್ತು ಶಿಕ್ಷಣ ರಾಜ್ಯ ಸಮಿತಿ ಸದಸ್ಯರಾದ ವಿ.ಎ. ಮುಹಮ್ಮದ್ ಸಖಾಫಿ ವಳವೂರು ಉದ್ಘಾಟಿಸಿದರು. ಪ್ರ. ಕಾರ್ಯದರ್ಶಿ ವಿ.ಎ. ಯೂಸುಫ್ ಸಿದ್ದೀಖ್ ಸಖಾಫಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ತಿಳಿದುಕೊಳ್ಳಲೇಬೇಕಾದ ನಿರ್ದಿಷ್ಟ ವಿಷಯಗಳ ಮಾಹಿತಿಯನ್ನೊಳಗೊಂಡ ಅಲ್ ಉಸ್ರತುತ್ತಯ್ಯಿಬ ಪ್ರತಿಯೊಂದು ಮನೆ ಮಂದಿ ನಿಗದಿತ ಸಮಯದಲ್ಲಿ ಸೇರಿಕೊಂಡು ನಡೆಸಬೇಕಾದ ಕಾರ್ಯಕ್ರಮ ಇದಾಗಿದೆ. ಇದರೊಂದಿಗೆ ಪ್ರತಿ ಮನೆಗಳ‌ ಮೂಲಕ ಸುನ್ನತ್ ಜಮಾಅತ್ ನ ಆದರ್ಶಗಳನ್ನು ಪ್ರಚಾರಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News