ಹಾಡಿಯಲ್ಲಿ ಮೃತಪಟ್ಟ ವೃದ್ಧ

Update: 2020-08-27 16:45 GMT

ಹಿರಿಯಡ್ಕ, ಆ.27: ಕಾಡುಬಳ್ಳಿ ತರಲೆಂದು ಹಾಡಿಗೆ ಹೋದ ಮಧುಮೇಹ ಕಾಯಿಲೆಯಿಂದ ಬಳಲುತಿದ್ದ ವೃದ್ಧರೊಬ್ಬರು ಸೂಕ್ತ ಸಮಯಕ್ಕೆ ಆಹಾರ ಸಿಗದೆ ಮಲಗಿದಲ್ಲೇ ಮೃತಪಟ್ಟ ಘಟನೆ ಬೊಮ್ಮರಬೆಟ್ಟು ಹ್ರಾಮದ ಗುಡ್ಡೆಯಂಗಡಿಯ ದೂಪದಮರದ ಹಾಡಿಯಲ್ಲಿ ವರದಿಯಾಗಿದೆ.

ಇಲ್ಲಿನ ನಡಿಮನೆ ಹಿರಿಯಣ್ಣ ಶೆಟ್ಟಿ ಇವರ ದೂಪದಮರದ ಹಾಡಿಗೆ ಕಾಡು ಬಳ್ಳಿ ತರಲು ಹೋದ ಕಾರ್ಕಳ ತಾಲೂಕು ನೀರೆ ಗ್ರಾಮದ ತ್ರಿಶೂಲ ನಗರದ ಶೀನ ಮೊಗ್ಗೇರಾ (65) ಮೃತರು. ಮಧುಮೇಹ ಕಾಯಿಲೆ ಇದ್ದ ಇವರು ಆಹಾರವಿಲ್ಲದೆ ನೆಲದ ಮೇಲೆ ಮಲಗಿದ್ದು, ಅಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News