×
Ad

ಭಾರತದ ಖಾಯಂ ವಲಸಿಗರಿಗೆ ಮಲೇಶ್ಯ ಪ್ರವೇಶ ನಿಷೇಧ

Update: 2020-09-02 23:49 IST

ಕೌಲಾಲಂಪುರ (ಮಲೇಶ್ಯ), ಸೆ. 2: ದೀರ್ಘಾವಧಿ ವಲಸೆ ಪಾಸ್‌ಗಳನ್ನು ಹೊಂದಿರುವ ಭಾರತ, ಇಂಡೋನೇಶ್ಯ ಮತ್ತು ಫಿಲಿಪ್ಪೀನ್ಸ್‌ಗಳ ಪ್ರಜೆಗಳು ಮಲೇಶ್ಯ ಪ್ರವೇಶಿಸುವುದನ್ನು ಸೆಪ್ಟಂಬರ್ 7ರಿಂದ ನಿಷೇಧಿಸಲಾಗುವುದು ಎಂದು ಆ ದೇಶ ಮಂಗಳವಾರ ತಿಳಿಸಿದೆ.

ದೇಶದಲ್ಲಿ ಹೊಸದಾಗಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆಯೇ, ವಿದೇಶಗಳಿಂದ ಕೊರೋನ ವೈರಸ್ ಬರುವುದನ್ನು ನಿಲ್ಲಿಸಲು ಅದು ಈ ಕ್ರಮ ತೆಗೆದುಕೊಂಡಿದೆ.

ದೇಶದ ಖಾಯಂ ನಿವಾಸಿ ವಲಸಿಗರು, ವಿದ್ಯಾರ್ಥಿಗಳು, ಸಂಗಾತಿ ವೀಸಾದ ಮೂಲಕ ಬರುವವರು ಹಾಗೂ ಮಲೇಶ್ಯದ ‘ಮೈ ಸೆಕಂಡ್ ಹೋಮ್’ ಕಾರ್ಯಕ್ರಮಗಳ ಭಾಗೀದಾರರಿಗೆ ನಿಷೇಧ ಅನ್ವಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News