ರಿಕ್ಷಾ ಚಾಲಕರಿಗೆ 15 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿ ವಿತರಣೆ

Update: 2020-09-04 15:30 GMT

ಹೆಬ್ರಿ, ಸೆ.4: ರಿಕ್ಷಾದಲ್ಲಿ ದುಡಿದು ಬದುಕು ನಡೆಸುತ್ತಿರುವವರು ಕೊರೋನ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದು, ಕಳೆದ 4 ತಿಂಗಳಿಂದ ಹೆಬ್ರಿ ಬ್ಲಾಕ್ ವ್ಯಾಪ್ತಿಯ 11 ಗ್ರಾಪಂಗಳ ರಿಕ್ಷಾ ಚಾಲಕ-ಮಾಲಕರಿಗೆ ಸುಮಾರು 15 ಲಕ್ಷ  ರೂ. ಮೌಲ್ಯದ ದಿನ ಬಳಕೆಯ ಆಹಾರ ಸಾಮಗ್ರಿಯನ್ನು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿತರಿಸಲಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ ತಿಳಿಸಿದ್ದಾರೆ.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 11 ಗ್ರಾಪಂಗಳ ರಿಕ್ಷಾ ಚಾಲಕ ಮಾಲಕ ರಿಗೆ ಹಾಗೂ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ದಿನಬಳಕೆಯ ಆಹಾರ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಶಿರ್ಲಾಲು ಗ್ರಾಮೀಣ ಅಧ್ಯಕ್ಷ ಜಯಕುಮಾರ್ ಜೈನ್, ಸುನೀತಾ ಶೆಟ್ಟಿ, ರಾಜು ಶೆಟ್ಟಿ, ಸತೀಶ್ ಜೈನ್, ದಯನಂದ ನಾಯಕ್, ಅಮಿತಾ ಭಂಡಾರಿ, ಶ್ರೀಧರ್ ಪೂಜಾರಿ, ಸುನೀಲ್ ಪೂಜಾರಿ, ದರ್ಶನ್ ಕುಮಾರ್ ಜೈನ್, ಪ್ರದೀಪ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News