ಮುಂಬೈ ಮಹಾನಗರಪಾಲಿಕೆ ಮಾಜಿ ಸದಸ್ಯೆ ಗೀತಾ ವಸಂತ ಯಾದವ್ ನಿಧನ

Update: 2020-09-05 08:36 GMT

ಮುಂಬೈ : ಜಿಲ್ಲೆಯ ಕಾಪು ಮೂಲದ ಮುಂಬೈ ವಾಸಿ, ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಇದರ ಅಂಧೇರಿ ಪಶ್ಚಿಮದ ವಾರ್ಸೋವಾ ವಿಭಾಗದ ಮಾಜಿ ಸದಸ್ಯೆ ಗೀತಾ ವಸಂತ್ ಯಾದವ್ (58) ಅಲ್ಪಕಾಲದ ಅಸ್ವಸ್ಥತೆಯಿಂದ ಶುಕ್ರವಾರ ಬೆಳಗ್ಗೆ ವಾರ್ಸೋವಾದ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಕಲ್ಯಾಣಪುರ ತೋನ್ಸೆಯ ಬಿಲ್ಲವ ಸಮುದಾಯದ ಚಂದಪ್ಪ ಗುರುವಪ್ಪ ಜತ್ತನ್ ಮತ್ತು ಕಲ್ಯಾಣಿ ಜತ್ತನ್ ಕಾಪು ಪುತ್ರಿಯಾಗಿರುವ ಗೀತಾ, ಮುಂಬೈಯಲ್ಲಿ ದಿಟ್ಟ ಸಂಘಟಕಿ, ನಿಷ್ಠಾವಂತ ಸಮಾಜ ಸೇವಕಿಯಾಗಿ ಪ್ರಸಿದ್ಧರಾಗಿದ್ದರು. ಮೃತರು ಪತಿ, ಮೂವರು ಪುತ್ರರು ಹಾಗೂ ಅಪಾರ ಬಂಧು- ಬಳಗ ಅಭಿಮಾನಿಗಳನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News