ಸೆ.14ರಂದು ತ್ರೈಮಾಸಿಕ ಅಂಚೆ ಅದಾಲತ್
Update: 2020-09-05 21:19 IST
ಉಡುಪಿ, ಸೆ.5: ಉಡುಪಿ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಸೆ.14ರಂದು ಅಪರಾಹ್ನ 3 ಘಂಟೆಗೆ ತ್ರೈಮಾಸಿಕ ಅಂಚೆ ಅದಾಲತನ್ನು ನಡೆಸ ಲಾಗುವುದೆಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಸೆ.11ರಂದು ಸಂಜೆ 3ಗಂಟೆ ಒಳಗೆ ಅಧೀಕ್ಷಕರ ಕಛೇರಿಗೆ ಕಳುಹಿಸಬಹುದು ಹಾಗೂ ಅಂಚೆ ಅದಾಲತ್ ನಡೆಯುವ ದಿನದಂದು ಹಾಜರಿದ್ದು ಸಮಕ್ಷಮ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದೆಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.