ಅಪಪ್ರಚಾರದ ವಿರುದ್ಧ ದೂರು
Update: 2020-09-05 17:59 GMT
ಮಂಗಳೂರು, ಸೆ. 5: ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ನಕಲಿ ಫೇಸ್ಬುಕ್ ಖಾತೆಯಲ್ಲಿ ಅಪಪ್ರಚಾರ ಮಾಡಲಾಗಿದೆ ಎಂದು ಬಜರಂಗದಳ ಮುಖಂಡ ಪುನೀತ್ ನೀಡಿದ ದೂರಿನ ಆಧಾರದಲ್ಲಿ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ಆಮಿಷ ನೀಡಿ ಅಮಾಯಕ ಹಿಂದೂ ಯುವತಿಯನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯುವಕರಿಗೆ ಒಪ್ಪಿಸಿ ಅತ್ಯಾಚಾರ ಮಾಡಿಸಲಾಗುತ್ತಿದೆ ಎಂದು ನಕಲಿ ಖಾತೆಯೊಂದರಲ್ಲಿ ಹಿಂದೂ ಯುವತಿ ಸೋಗಿನಲ್ಲಿ ಅಪಪ್ರಚಾರ ಮಾಡಲಾಗಿದೆ. ಇತ್ತೀಚೆಗೆ ಆಶಿಕ್ ಮೈಕಾಲ ಫೇಸ್ಬುಕ್ ಖಾತೆ, ಮಾರಿಪಳ್ಳ ಫ್ರೆಂಡ್ಸ್ ಎಂಬ ವಾಟ್ಸ್ಆ್ಯಪ್ ಗ್ರೂಪ್ ಹಾಗೂ ತಕ್ಯೂಯ್ಯ ಎಂಬ ಗ್ರೂಪ್ಗಳಲ್ಲಿ ಮಾನಹಾನಿಕರ ಸುದ್ದಿ ಹರಡಿ ಹಿಂದೂ-ಮುಸ್ಲಿಂ ನಡುವಿನ ಸಾಮರಸ್ಯ ಕೆಡಿಸಿ ಕೋಮು ಲಭೆಯ ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.