ಮೊಂಟೆಪದವು: ಶಿಕ್ಷಕ ಲಕ್ಷ್ಮಣ್ ಪೂಜಾರಿಗೆ ಸನ್ಮಾನ

Update: 2020-09-06 12:22 GMT

ದೇರಳಕಟ್ಟೆ, ಸೆ. 6: ಮೊಂಟೆಪದವಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ನಡೆದ ಶಿಕ್ಷಕ ದಿನಾಚರಾಣೆಯ ಸಂದರ್ಭ ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಬೆನ್ನೆಲುಬಾಗಿ ನಿಂತು ಸುದೀರ್ಘ ಮೂವತ್ತ ಮೂರು ವರ್ಷಗಳ ಕಾಲ ಅಧ್ಯಾಪಕ ವೃತ್ತಿಯಲ್ಲಿದ್ದು ನಿವೃತ್ತಿ ಹಂತದಲ್ಲಿರುವ ಹಿರಿಯ ಅಧ್ಯಾಪಕ ಲಕ್ಷ್ಮಣ್ ಪೂಜಾರಿ ಎಸ್. ಅವರನ್ನು ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸಲಾಯಿತು.

ಮೊಂಟೆಪದವು ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲೆ ವನಿತಾ ದೇವಾಡಿಗ ಅತಿಥಿಯಾಗಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಶೈನ್ ಮತ್ತು ನರಿಂಗಾನ ಗ್ರಾಪಂ ಮಾಜಿ ಸದಸ್ಯ ರೆಹ್ಮಾನ್ ಮರಿಕ್ಕಳ, ಶಿಕ್ಷಕಿಯಾರಾದ ಅನಿತಾಕ್ಷಿ ಮತ್ತು ಚಂಚಲಾಕ್ಷಿ ಮಾತನಾಡಿದರು.

ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಚಂದ್ರಿಕಾ, ರೋಹಿಣಿ, ಸಂಗೀತಾ ಉಪಸ್ಥಿತರಿದ್ದರು.
ಸೌಮ್ಯಾ ಪಿವಿ ಪ್ರಾರ್ಥನಾ ಗೀತೆ ಹಾಡಿದರು. ಅಶೀರುದ್ದೀನ್ ಸರ್ತಾಬೈಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News