ಗುರುಪುರ ಯುವಕ ಸಂಘಕ್ಕೆ ಕ್ರೀಡಾ ಪರಿಕರ ಕಿಟ್ ವಿತರಣೆ

Update: 2020-09-06 12:25 GMT

ಗುರುಪುರ, ಸೆ.6: ದ.ಕ.ಜಿಪಂ ಸದಸ್ಯ ಯುಪಿ ಇಬ್ರಾಹಿಂ ಅವರ ಮುತುವರ್ಜಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ‘ಯುವ ಚೈತನ್ಯ’ ಯೋಜನೆಯಡಿ(2019-20) ಗುರುಪುರ ‘ಯುವಕ ಸಂಘ(ರಿ)ಕ್ಕೆ ಹಂಚಿಕೆಯಾಗಿರುವ ಕ್ರೀಡಾ ಪರಿಕರಗಳ ಕಿಟ್‌ನ್ನು ರವಿವಾರ ಸಂಘದ ಕಚೇರಿಯಲ್ಲಿ ತಾಪಂ ಸದಸ್ಯ ಸಚಿನ್ ಅಡಪ ಮತ್ತು ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿಎಂ ಉದಯ್ ಭಟ್ ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಶಿವಶಂಕರ್ ಶೆಟ್ಟಿಗಾರ್ ಸ್ವಾಗತಿಸಿದರು. ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ವಿಜಯ್ ಗುರುಪುರ, ಕ್ರೀಡಾ ಕಾರ್ಯದರ್ಶಿಗಳಾದ ಸಂತೋಷ್ ಗುರುನಗರ, ನಿಖಿಲ್‌ರಾಜ್ ಹಾಗೂ ರೂಪೇಶ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News