×
Ad

ಕೋವಿಡ್ -19 ನಿಯಂತ್ರಿಸಲು ರಾಜ್ಯ ಸರಕಾರ ವಿಫಲ ಆರೋಪ : ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಧರಣಿ

Update: 2020-09-07 21:36 IST

ಮಂಗಳೂರು, ಸೆ.7: ದ.ಕ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ವೆಂಟಿಲೇಟರ್, ಐ.ಸಿ.ಯು. ಬೆಡ್‌ಗಳ ಕೊರತೆಯಿದ್ದು, ಸೂಕ್ತ ಸೌಲಭ್ಯ ಒದಗಿಸುವಲ್ಲಿ ವಿಫಲವಾದ ರಾಜ್ಯ ಸರಕಾರದ ವಿರುದ್ಧ ಹಾಗೂ ರಾಜ್ಯ ಆರೋಗ್ಯ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆಯ ಎದುರು ಧರಣಿ ನಡೆಸಲಾಯಿತು.

ಧರಣಿ ನಿರತರರನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೊರೋನಗೆ ಚಿಕಿತ್ಸೆ ನೀಡುವ ಜಿಲ್ಲೆಯ 9 ಖಾಸಗಿ ಆಸ್ಪತ್ರೆಗಳು ಮತ್ತು ಸರಕಾರಿ ವೆನ್ಲಾಕ್ ಸಹಿತ ಒಟ್ಟು 120 ಐಸಿಯು ಬೆಡ್, 117 ವೆಂಟಿಲೇಟರ್ ಬೆಡ್ ಮತ್ತು 611 ಹೈ ಆ್ಯಕ್ಸಿಜನ್ ಬೆಡ್‌ಗಳು ಕೊರೋನ ರೋಗಿಗಳಿಗೆ ಭರ್ತಿಯಾಗಿವೆ. ಇನ್ನೂ ಹೊಸದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಬೇಕಾಗಿದ್ದವರು ಪರದಾಡ ವಂತಾಗಿದೆ. ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಆದರೆ ಅಲ್ಲಿ ಕೂಡ ಐಸಿಯೂ ಭರ್ತಿಯಾಗಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ರಾಣಾಪಾಯ ಎದುರಾಗಿದೆ. ಕೊರೋ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್‌ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕರಾರದ ಐವನ್ ಡಿಸೋಜ, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು. ಪಕ್ಷದ ಮುಖಂಡರಾದ ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ನೀರಜ್‌ಚಂದ್ರ ಪಾಲ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಸುರೇಂದ್ರ ಕಂಬಳಿ, ವಿಶ್ವಾಸ್ ಕುಮಾರ್ ದಾಸ್, ಸದಾಶಿವ ಶೆಟ್ಟಿ, ವಸಂತ್ ಬೆರ್ನಾಡ್, ಮುಹಮ್ಮದ್ ಮೋನು, ವಿವೇಕ್ ರಾಜ್ ಪೂಜಾರಿ, ಬಿ.ಎಂ. ಅಬ್ಬಾಸ್ ಅಲಿ, ಎ.ಸುರೇಶ್ ಶೆಟ್ಟಿ, ಅಶ್ರಫ್ ಎಚ್.ಎಂ., ಸುಭೋದಯ ಆಳ್ವ, ಸಂತೋಷ್ ಶೆಟ್ಟಿ, ಸಂಶುದ್ದೀನ್ ಕುದ್ರೋಳಿ, ಎ.ಸಿ.ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜ, ಜೆಸಿಂತಾ ಆಲ್ಫ್ರೆಡ್, ಅನಿಲ್ ಕುಮಾರ್, ಸಂಶುದ್ದೀನ್ ಬಂದರ್, ಅಬೂಬಕರ್ ಕುದ್ರೋಳಿ, ಪ್ರತಿಭಾ ಕುಳಾಯಿ, ಜಯಶೀಲ ಅಡ್ಯಂತಾಯ, ಅಶ್ರಫ್ ಬಜಾಲ್, ಅಪ್ಪಿ, ರಜನೀಶ್, ಮುಹಮ್ಮದ್ ಕುಂಜತ್‌ಬೈಲ್, ಪ್ರಕಾಶ್ ಸಾಲ್ಯಾನ್, ನಾಗೇಂದ್ರ ಕುಮಾರ್, ಮಂಜುಳಾ ನಾಯ್ಡು, ಸಬೀತಾ ಮಿಸ್ಕಿತ್, ಶಬ್ಬೀರ್ ಎಸ್., ಪದ್ಮನಾಭ ಅಮೀನ್, ಟಿ.ಕೆ.ಸುಧೀರ್, ಯು.ಟಿ.ತೌಸೀಫ್, ರಾಮದಾಸ್ ಪ್ರಭು, ಸವಾದ್ ಗೂನಡ್ಕ, ಸಿದ್ದೀಕ್ ಪಾರೆ, ತೆರಸಾ ಪಿಂಟೋ, ಸ್ಟೀಫನ್ ಮರೋಳಿ, ಲಾರೆನ್ಸ್ ಡಿಸೋಜ, ಇಕ್ಬಾಲ್ ಸಾಮಾಣಿಗೆ, ಸಮರ್ಥ್ ಭಟ್, ಮುದಸ್ಸಿರ್ ಕುದ್ರೋಳಿ, ಪುನೀತ್ ಶೆಟ್ಟಿ, ಎ.ಆರ್.ಇಮ್ರಾನ್, ಅಬ್ಬಾಸ್ ಸಲೀಂ, ಭುವನ್ ಕರ್ಕೇರ, ಚೇತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News