ಗಾಂಜಾ ಸೇವನೆ: 10 ಮಂದಿ ವಶಕ್ಕೆ

Update: 2020-09-11 15:40 GMT

ಬೈಂದೂರು, ಸೆ.11: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಪೊಲೀಸರು ಉಡುಪಿ ಜಿಲ್ಲೆಯಾದ್ಯಂತ 10 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಂದೂರು ಠಾಣಾ ವ್ಯಾಪ್ತಿಯ ನಾವುಂದ ಎಂಜಿ ರಸ್ತೆಯ ಮಿಸ್ಬಾ(22), ಇಜಾಜ್ ಅಹಮ್ಮದ್(19) ಮತ್ತು ಬಡಾಕೆರೆಯ ಮಹಮ್ಮದ್ ಆಸಿಫ್ (30), ಸೆ.9ರಂದು ಕುಂದಾಪುರ ಠಾಣಾ ವ್ಯಾಪ್ತಿಯ ತಲ್ಲೂರು ಜಂಕ್ಷನ್ ಬಳಿ ಕೋಟೆ ಬಾಗಿಲು ನಿವಾಸಿ ಗುರುರಾಜ್ ಖಾರ್ವಿ (22), ಹೆಮ್ಮಾಡಿ ಜಂಕ್ಷನ್ ಬಳಿ ಸ್ಥಳೀಯ ನಿವಾಸಿ ಪ್ರಸನ್ನ(23), ಹೆಮ್ಮಾಡಿ ಸಂತೋಷ ನಗರದ ನಾಗರಾಜ (23), ಕುಂಭಾಶಿ ಗ್ರಾಮದ ವಿನಾಯಕ ನಗರ ಎಂಬಲ್ಲಿ ಸ್ಥಳೀಯ ನಿವಾಸಿ ಆಕಾಶ್(20), ಮೂಡುಗೋಪಾಡಿ ಎಂಬಲ್ಲಿ ಸ್ಥಳೀಯ ನಿವಾಸಿ ಮುಶ್ರೀಫ್ ಅಹಮ್ಮದ್(24), ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಕಾರ್ಕಳ ಪತ್ತೊಂಜಿಕಟ್ಟೆ ಮೈದಾನದ ಬಳಿ ಕಜೆ ರಸ್ತೆಯ ಮಹಮ್ಮದ್ ಅಜರ್(24) ಮತ್ತು ಸೆ.10ರಂದು ಬಂಗ್ಲೆಗುಡ್ಡೆ ಬಳಿ ಸದ್ಬಾವನ ನಗರದ ಪ್ರಜ್ವಲ್(25) ಎಂಬವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News