ಕಾಪು: ರಿಕ್ಷಾ ನಿಲ್ದಾಣ ಉದ್ಘಾಟನೆ

Update: 2020-09-13 17:10 GMT

ಕಾಪು: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾಪು ಪುರಸಭಾ ವ್ಯಾಪ್ತಿಯ ಕಾಪು ಬೀಚ್ ಬಳಿ ನೂತನ ನಿರ್ಮಿಸಿದ ಆಟೋ ರಿಕ್ಷಾ ತಂಗುದಾಣವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ರವಿವಾರ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ದೇಶದಲ್ಲಿ ಕೊರೋನ ಸೋಂಕಿನಿಂದಾಗಿ ಉದ್ಯಮಕ್ಕೆ ತೊಡಕು ಉಂಟಾಗಿದೆ. ರಿಕ್ಷಾ ಚಾಲಕರು ಕೂಡ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂದರ್ಭ ಸುರಕ್ಷತೆ ದೃಷ್ಟಿಯಿಂದ ವ್ಯವಸ್ಥಿತ ಆಟೋ ನಿಲ್ದಾಣ ನಿರ್ಮಾಣವಾಗಿರುವುದು ತೃಪ್ತಿ ತಂದಿದೆ. ರಿಕ್ಷಾ ಚಾಲಕರು ಸೇವೆ ಸಂದರ್ಭ ತಮ್ಮ ಆರೋಗ್ಯದ ಕುರಿತು ಜಾಗ್ರತೆ ವಹಿಸಬೇಕೆಂದರು.

ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷರಾದ ಮನೋಹರ್ ಶೆಟ್ಟಿ, ಕಾಪು ಪುರಸಭಾ ಮುಖ್ಯಾದಿಕಾರಿ ವೆಂಕಟೇಶ ನಾವುಡ, ಪುರಸಭೆ ಸದಸ್ಯೆ ಮಮತಾ ಕುಶ ಸಾಲ್ಯಾನ್ ಉಪಸ್ಥಿತರಿದ್ದರು.

ಕಾಪು ಆಟೋರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ  ಗಂಗಾಧರ ಸುವರ್ಣ ಸ್ವಾಗತಿಸಿ ಪ್ರಾಸ್ತಾವನೆಗೈದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News