ಗಾಂಜಾ ಸೇವನೆ: ಮೂವರ ವಿರುದ್ಧ ಪ್ರಕರಣ ದಾಖಲು

Update: 2020-09-13 17:15 GMT

ಪಡುಬಿದ್ರಿ: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಹೆಜಮಾಡಿ ಚೆಕ್‍ ಪೋಸ್ಟ್ ಶುಕ್ರವಾರ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಿಕ್ಕಿ ಬಿದ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿ ದೃಢಪಟ್ಟಿರುವ ಮೂವರ ವಿರುದ್ಧ ಇಂದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಕುತ್ತೆತ್ತೂರಿನ ಪ್ಲಂಬರ್ ವೃತ್ತಿಯ ಅಕ್ಷಿತ್ ಕುಮಾರ್(23), ಬಂಟ್ವಾಳದ ಡಿಪ್ಲೋಮಾ ಪದವೀಧರ ಯಜ್ಞೇಶ್(22) ಹಾಗೂ ಕಾಸರಗೋಡು ಮಂಗಲ್ಪಾಡಿಯ ನೆಟ್ವರ್ಕ್ ಮಾರ್ಕೆಟಿಂಗ್‍ನ ಪವನ್ ಕುಮಾರ್(21) ಎಂದು ಗುರುತಿಸಲಾಗಿದೆ.  ಇವರು ಕಾರಿನಲ್ಲಿ ಲ್ಲಿ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಚೆಕ್‍ಪೋಸ್ಟ್ ನಲ್ಲಿ ಎಸ್‍ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ತಪಾಸಣೆ ನಡೆಸುವ ವೇಳೆ ಮೂವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇವರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News