ಬಡಗಬೆಟ್ಟು ಸೊಸೈಟಿಯಿಂದ ಅಪಘಾತ ವಿಮಾ ಪರಿಹಾರ ವಿತರಣೆ

Update: 2020-09-15 13:31 GMT

ಉಡುಪಿ, ಸೆ.15: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚೆನ್ನಪ್ಪ ಪೂಜಾರಿ ಕುಟುಂಬಕ್ಕೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಿರ್ವ ಶಾಖೆಯ ವತಿಯಿಂದ 15 ಲಕ್ಷ ರೂ. ವಿಮಾ ಪರಿಹಾರ ಮೊತ್ತವನ್ನು ವಿತರಿಸಲಾಯಿತು.ಮೃತರಿಗೆ ಸೇರಿದ ಸ್ಕೂಟರಿಗೆ ಉಡುಪಿಯ ಬಡಗಬೆಟ್ಟು ಸೊಸೈಟಿಯು ಈಗಾಗಲೇ ವಿಮೆ ಮಾಡಿದ್ದು, ಈ ವಿಮಾ ಪಾಲಿಸಿಯಡಿ ಉಡುಪಿಯ ಓರಿ ಯಂಟಲ್ ವಿಮಾ ಕಂಪೆನಿಯ ಕಾನೂನು ಘಟಕ(ಟಿ.ಪಿ.ಹಬ್) ವತಿಯಿಂದ ಮೃತನ ವಾರಿಸುದಾರ ಪತ್ನಿ ವಾರಿಜ ಪೂಜಾರ್ತಿಯವರಿಗೆ ಪರಿಹಾರದ ಮೊತ್ತ ವನ್ನು ಸೊಸೈಟಿಯ ಶಿರ್ವ ಶಾಖೆಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಒರಿಯಂಟಲ್ ವಿಮಾ ಸಂಸ್ಥೆಯ ಕಾನೂನು ಘಟಕದ ಮುಖ್ಯಸ್ಥ ಗೋಪಿಕೃಷ್ಣ ರಾವ್, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಎಸ್., ಶಿರ್ವ ಶಾಖಾ ವ್ಯವಸ್ಥಾಪಕ ಶಂಕರ್ ಸೇರಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News