ಭಟ್ಕಳ: ಮಳೆಯಿಂದ ಮನೆ ಕುಸಿತ; ಸಹಾಯ ಹಸ್ತ ಚಾಚಿದ ಶಾಸಕ

Update: 2020-09-16 12:51 GMT

ಭಟ್ಕಳ: ಮಂಗಳವಾರ ತಡ ರಾತ್ರಿ ಗಾಳಿ ಮಳೆಯಿಂದಾಗಿ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಭಟ್ಕಳದಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು, ಸ್ಥಳಕ್ಕೆ  ಭೇಟಿ ನೀಡಿದ ಶಾಸಕ ಸುನಿಲ್ ನಾಯ್ಕ ಮನೆ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿದ್ದಾರೆ.

ನಾಗಮ್ಮ ಮಾಸ್ತಪ್ಪ ನಾಯ್ಕ(70) ಇವರ ವಾಸ್ತವ್ಯದ ಮನೆ ಸಂಪೂರ್ಣ ಬಿದ್ದು ಹೋಗಿದ್ದು, ಅಪಾರ ಹಾನಿಯಾಗಿದೆ . ಈ ಸುದ್ದಿ ತಿಳಿದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಹೊಸ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿ.ಜೆ.ಪಿ.ಹಿರಿಯ ಮುಖಂಡ ಕೃಷ್ಣ ನಾಯ್ಕ,ಪಂಚಾಯತ ಮಾಜಿ ಸದಸ್ಯ ಚಂದ್ರಹಾಸ ನಾಯ್ಕ,ಮುಟ್ಟಳ್ಳಿ ಗ್ರಾಮ ಲೆಕ್ಕಿಗ ಸಲ್ಮಾನ್ ಖಾನ್,ಪಂಚಾಯತ ಪಿ.ಡಿ.ಓ.ರಾಜೇಶ್ವರಿ ಚಂದಾವರ,ಪoಚಾಯತ ಕಾರ್ಯದರ್ಶಿ ಮಂಜುನಾಥ ಶೇಟಿ ಮನೆ, ಸ್ಥಳೀಯ ಮುಖಂಡ ರಾದ ವೆಂಕಟೇಶ್ ಟಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News