ವಿದ್ಯುತ್ ಕಂಬಗಳಿಗೆ ಕಾರು ಢಿಕ್ಕಿ : ಮೆಸ್ಕಾಂಗೆ ನಷ್ಟ

Update: 2020-09-16 16:06 GMT

ಕುಂದಾಪುರ, ಸೆ.16: ಕಾರೊಂದು ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂಗೆ ಸಾವಿರಾರು ರೂ. ನಷ್ಟ ಉಂಟಾಗಿರುವ ಘಟನೆ ಸೆ.15ರಂದು ರಾತ್ರಿ 10:20ರ ಸುಮಾರಿಗೆ ಕುಂದಾಪುರ ಮಂಗಲಪಾಂಡೆ ರಸ್ತೆಯಲ್ಲಿ ನಡೆದಿದೆ.

ಮಂಗಲಪಾಂಡೆ ರಸ್ತೆಯಲ್ಲಿ ಹಾದು ಹೋಗಿರುವ 11 ಕೆ.ವಿ ಪ್ಲೀಡರ್ನ ಆಧಾರ ಕಂಬಗಳಿಗೆ ಕಾರಿನ ಚಾಲಕ ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು, ಇದರಿಂದ ಎಚ್.ಟಿ. ಮಾರ್ಗದ ಆಧಾರವಾಗಿರುವ ಎರಡು ಕಂಬಗಳು ತುಂಡಾಗಿ ಮೆಸ್ಕಾಂ ಸಂಸ್ಥೆಗೆ ಸುಮಾರು 30,000ರೂ. ನಷ್ಟ ಉಂಟಾಗಿದೆ. ಕಾರು ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News