ಉ.ಕ. ಜಿ.ಪಂ.ಮಾಜಿ ಸದಸ್ಯ ಶ್ರೀಪಾದ ಕಾಮತ್ ನಿಧನ

Update: 2020-09-16 17:10 GMT

ಭಟ್ಕಳ : ಉತ್ತರಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಮುರುಡೇಶ್ವರದ ದೇವಸ್ಥಾನದ ಟ್ರಸ್ಟಿ ಶ್ರೀಪಾದ ಕಾಮತ್ (64) ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಕಳೆದೊಂದು ವಾರದಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ  ಇಂದು ನಿಧನರಾಗಿದ್ದಾರೆ. ಜನಾನುರಾಗಿಯಾಗಿದ್ದ ಶ್ರೀಪಾದ ಕಾಮತ್ ಅವರು ಜಿಲ್ಲಾ ಪಂಚಾಯತ್ ಮಾವಳ್ಳಿ ಕ್ಷೇತ್ರದ  ಸದಸ್ಯರಾಗಿ ಎರಡು ಬಾರೀ ಆಯ್ಕೆಯಾಗಿದ್ದರು. ಒಮ್ಮೆ ಜಿಲ್ಲಾ ಪಂಚಾಯತ್ ನ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಹಾಲಿ ಮುರ್ಡೇಶ್ವರದ ದೇವಾಲಯದ ಟ್ರಸ್ಟಿಯಾಗಿ ಕೆಲ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ರಾಮಕೃಷ್ಣ ಹೆಗಡೆ ಅವರ ಶಿಷ್ಯರಾಗಿದ್ದ ಅವರು ಮಾಜಿ ಸಚಿವ ಆರ್ ವಿ ದೇಶಪಾಂಡೆ ಕಾಂಗ್ರೆಸ್ ಗೆ ಪ್ರವೇಶಿಸಿದಾಗ ಅವರೊಂದಿಗೆ ಕಾಂಗ್ರೆಸ್ ಸೇರಿಕೊಂಡಿದ್ದರು. ಮೃತರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News