ಹಾವೇರಿಯ ‘ಮುಈನುಸ್ಸುನ್ನ’ಕ್ಕೆ ಪದಾಧಿಕಾರಿಗಳ ಆಯ್ಕೆ

Update: 2020-09-18 12:43 GMT
ಸೈಯದ್ ಅಬ್ದುರ್ರಹ್ಮಾನ್ ಶಹೀರ್ , ಡಾ. ಶೇಖ್‌ಬಾವ

ಮಂಗಳೂರು, ಸೆ.18: ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿತವಾದ ಮುಈನುಸ್ಸುನ್ನ ಮೋರಲ್ ಅಕಾಡಮಿ ಹಾವೇರಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದಾವಣಗೆರೆಯ ‘ಮುಈನುಸ್ಸುನ್ನ ದಾರುಲ್ ಉಲೂಂ ರಹ್ಮಾನಿಯ್ಯ ಕ್ಯಾಂಪಸ್’ನಲ್ಲಿ ಸಂಸ್ಥೆಯ ಅಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫಾ ನಈಮಿ ಹಿಮಮಿ ಲೆಕ್ಕ ಪತ್ರ ಮಂಡಿಸಿ ವರದಿ ವಾಚಿಸಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ಸೈಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಮುಸ್ತಫಾ ನಈಮಿ ಹಿಮಮಿ, ಕೋಶಾಧಿಕಾರಿಯಾಗಿ ಡಾ. ಶೇಖ್‌ಬಾವ ಮಂಗಳೂರು ಪುನರಾಯ್ಕೆಯಾದರು.

ಉಪಾಧ್ಯಕ್ಷರಾಗಿ ಸೈಯದ್ ಮುನೀರುಲ್ ಅಹ್ಮಲ್ ಮುಹಿಮ್ಮಾತ್, ಕೆ.ಎಂ. ಅಬೂಬಕರ್ ಸಿದ್ದೀಕ್ ಮತ್ತು ಮುಹ್ಸಿನ್ ರಿಫಾಈ ಹಾವೇರಿ, ಕಾರ್ಯದರ್ಶಿಗಳಾಗಿ ಸೈಯದ್ ಅತ್ಹರ್ ಸಖಾಫಿ ಸವಣೂರು, ಫಾರೂಕ್ ಮುಸ್ಲಿಯಾರ್ ದಾವಣಗೆರೆ, ಹಂಝ ಸಅದಿ ಅಲ್ಅಫ್ಳಲಿ, ಕೆ.ಕೆ. ಅಶ್ರಫ್ ಸಖಾಫಿ ಮತ್ತು ಸಿದ್ದೀಕ್ ಸಖಾಫಿ ಕಾಯಾರ್ ಹಾಗೂ ಸದಸ್ಯರಾಗಿ ಕೆ.ಕೆ.ಎಂ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಮುಸ್ತಫಾ ಸಅದಿ ಉಜಿರೆ, ಇಸ್ಮಾಯಿಲ್ ಮುಸ್ಲಿಯಾರ್ ಲುಕ್ಮಾನಿಯಾ, ಯಾಸೀನ್ ಸಖಾಫಿ ಅಡ್ಡೂರು, ಜೈ ಅಬ್ದುರ್ರಹ್ಮಾನ್ ದಾವಣಗೆರೆ, ಅಲ್ತಾಫ್ ಸವಣೂರು, ಮುಕ್ತಾರ್ ರಝ್ವಿ ಹತ್ತಿಮತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News