ಬೆಳ್ತಂಗಡಿ: ಜನಜಾಗೃತಿ ಪ್ರಾದೇಶಿಕ ಕಚೇರಿ ಶುಭಾರಂಭ
Update: 2020-09-18 14:55 GMT
ಬೆಳ್ತಂಗಡಿ: ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಜನಜಾಗೃತಿ ಪ್ರಾದೇಶಿಕ ಕಚೇರಿಯ ಶುಭಾರಂಭ ಕಾರ್ಯಕ್ರಮವು ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಮ್ಯಾನ್ಷನ್ ಕಟ್ಟಡದಲ್ಲಿ ಇಂದು ನಡೆಯಿತು.
ಕಚೇರಿಯಲ್ಲಿ ವೇಣೂರು ಬಜಿರೆಯ ಶ್ರೀಧರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಜನಜಾಗೃತಿ ವೇದಿಕೆಯ ಧ್ವಜವನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷೆ ಶಾರದ ಆರ್ ರೈ, ಜನಜಾಗೃತಿ ಮಾಜಿ ರಾಜ್ಯಧ್ಯಕ್ಷ ದೇವದಾಸ್ ಹೆಬ್ಬಾರ್, ರಾಜೀವ್ ರೈ ಕಣಿಯೂರು, ರಾಜೀತ್ ಜೈನ್ ಬೆಳ್ತಂಗಡಿ, ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ, ಚೆನ್ನಪ್ಪ ಗೌಡ, ನಾಗೇಶ್ ಎಸ್.ಪಿ, ಮಾಧವ, ಭಾಸ್ಕರ್, ಗಣೇಶ್ ವಕೀಲರಾದ ರತ್ಮವರ್ಮ ಬುಣ್ಣು, ಕಚೇರಿ ಸಿಬ್ಬಂದಿ ಗಳು ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.